By using this site, you agree to the Privacy Policy and Terms of Use.
Accept
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Notification Show More
Aa
Aa
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Have an existing account? Sign In
Follow US
Copyright © 2023 All Rights Reserved. Website Developed By WebOnline.in
ಸಮಗ್ರ ಪ್ರಭ > ರಾಜಕೀಯ > ನಾನು ನಿಮ್ಮೆಲ್ಲರ ಮನೆಮಗಳು ಆಶೀರ್ವಾದಿಸಿ : ಸುಜಾತಾ ದೊಡ್ಡಮನಿ
ರಾಜಕೀಯರಾಜ್ಯ

ನಾನು ನಿಮ್ಮೆಲ್ಲರ ಮನೆಮಗಳು ಆಶೀರ್ವಾದಿಸಿ : ಸುಜಾತಾ ದೊಡ್ಡಮನಿ

graochandan1@gmail.com
Last updated: 2023/04/27 at 8:42 PM
graochandan1@gmail.com
Share
2 Min Read
List of Images 1/1
27 sht 01
SHARE

ಶಿರಹಟ್ಟಿ: ಭ್ರಷ್ಟ ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಜನರಿಗೆ ನೀಡುವದಾಗಿ ಹೇಳಿ ಜನರಿಗೆ ಅನ್ಯಾಯ ಮಾಡಿದ್ದು, ಜನತೆಗೆ ಮೋಸ ಮಾಡಿದ್ದು ಬಿಜೆಪಿಗೆ ಈ ಬಾರಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದ್ದು, ನಾನು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತಗಳನ್ನು ವಿರೋಧಿಸುತ್ತೇನೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅವರು ಗುರುವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಗುರುವಾರ ನರೇಗಲ್‍ದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ನಾನು ಹೇಳಿದ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗಿದ್ದು, ಇದು ಪಕ್ಕಾ ಬಿಜೆಪಿ ಪಕ್ಷದ ಕುತಂತ್ರವಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ದಾಂತಗಳನ್ನು ವಿರೋಧಿಸಿದ್ದು, ವೈಯಕ್ತಿಕವಾಗಿ ಯಾರ ಮನಸ್ಸನ್ನು ನೋಯಿಸುವ ಪ್ರಯತ್ನವನ್ನು ನಾನು ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ, ಆಕಸ್ಮಾತ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ಬಿಜೆಪಿ ಕೆಲವು ಶಕ್ತಿಗಳು ಕಾಂಗ್ರೆಸ್‍ನ ಮತ್ತು ನನ್ನ ಹೇಳಿಕೆಗಳನ್ನು ತಿರುಚಿ ಬರೆಯುವ ಕೆಲಸ ಮಾಡುತ್ತಿದ್ದು, ಜನರಿಗೆ ಸುಳ್ಳು, ವಂಚನೆ ಮತ್ತು ಮೋಸದಿಂದ ಆಡಳಿತ ನಡೆಸಿ ಆಡಳಿತದ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಈ ಪವಿತ್ರ ಕ್ಷೇತ್ರದಲ್ಲಿ ನಾನು ಭರವಸೆ ನೀಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಕೊಟ್ಟ ಪ್ರಣಾಳಿಕೆಯಂತೆ ಪಕ್ಷ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸೂಚನೆ ನೀಡಿದ್ದೇನೆ. ಇದರಲ್ಲಿ ಯಾವ ಸಂಶಯವು ಬೇಡ ಎಂದು ಹೇಳಿದರು.

- Advertisement -
Ad image

ಶಿರಹಟ್ಟಿ ಮೀಸಲು ವಿಧಾನಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಜಾತಾ ದೊಡ್ಡಮನಿ ಮಾತನಾಡಿ, ನಾನು ನಿಮ್ಮೆಲ್ಲರ ಮನೆಯ ಮಗಳಾಗಿದ್ದು, ನಾನು ಹೊರಗಿನ ಅಭ್ಯರ್ಥಿ ಅಲ್ಲ. ಲಕ್ಷ್ಮೇಶ್ವರದಲ್ಲಿ ಜನಿಸಿ ಶಿರಹಟ್ಟಿ ಪಟ್ಟಣದಲ್ಲಿ ವಿಧ್ಯಾಭ್ಯಾಸ ಮಾಡಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದವರು ಸುಮ್ಮನೆ ನನ್ನ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ಸಮಾನತೆ ಅಂಗವಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆಧ್ಯತೆ ನೀಡುವ ಉದ್ದೇಶದೊಂದಿಗೆ ಮಹಿಳೆಯರಿಗೆ ಅವಕಾಶ ನೀಡಿದ್ದು, ನನಗೆ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಪ್ರತಿ ಗ್ರಾಮಗಳಲ್ಲಿ ಮಹಿಳೆಯರಾದಿಯಾಗಿ ಎಲ್ಲರು ನನಗೆ ಅದ್ದೂರಿಯಾಗಿ ಮತ್ತು ಅಭೂತಪೂರ್ವ ಬೆಂಬಲ ನೀಡುತ್ತಿದ್ದು, ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಅಪಾರ ಜನಸಂಖ್ಯೆ. ವಿರೋಧಿಗಳ ಮಾತಿಗೆ ಕಿವಿಗೊಡದೇ ನಿಸ್ವಾರ್ಥ ಸೇವೆ ಸಲ್ಲಿಸುವ ಮತ್ತು ರಾಷ್ಟ್ರಹಿತ ಬಯಸುವ ಕಾಂಗ್ರೆಸ್‍ಗೆ ಮತ ನೀಡಿ ನನಗೆ ಆಶೀರ್ವದಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ಎಚ್.ಕೆ ಪಾಟೀಲ, ವಾಸಣ್ಣ ಕುರಡಗಿ, ಐ.ಜಿ ಸನದಿ, ಜಿ.ಎಸ್ ಗಡ್ಡದೇವರಮಠ, ವೈ.ಎನ್ ಗೌಡರ, ಶಿವಕುಮಾರಗೌಡ ಪಾಟೀಲ, ಎಚ್.ಡಿ ಮಾಗಡಿ, ಶಿವನಗೌಡ ಪಾಟೀಲ, ಜಯಕ್ಕ ಕಳ್ಳಿ, ದೇವಪ್ಪ ಲಮಾಣಿ, ರಾಮಣ್ಣ ಲಮಾಣಿ, ಎಸ್. ಪಿ ಬಳಿಗಾರ, ವಾಸಣ್ಣ ಕುರಡಗಿ, ಫಕೀರೇಶ ಮ್ಯಾಟಣ್ಣವರ, ಮುತ್ತುರಾಜ ಭಾವಿಮನಿ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

graochandan1@gmail.com April 27, 2023 April 27, 2023
Share this Article
Facebook Twitter Copy Link Print

Recent Posts

  • ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈಜೋಕಾಲಿ 21 ಜನರಿಗೆ ಗಾಯ : ಜಾತ್ರಾ ಕಮೀಟಿ ಅಧ್ಯಕ್ಷ ಸೇರಿದಂತೆ 7 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲು
  • ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ವೀಲ್ ಕಟ್ ಆಗಿ 8 ಕ್ಕೂ ಹೆಚ್ಚು ಜನರಿಗೆ ಗಾಯ 2 ಇಬ್ಬರು ಸ್ಥಿತಿ ಗಂಭೀರ
  • ಸಿಡಿಲು ಬಡಿದು 25 ಕುರಿಗಳು ಸಾವು
  • ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
  • ಪ್ರಿಯತಮೆ ರತ್ನಾಳ ಪೋನ ನಂಬಿ ಹೋಗಿ ಕೊಲೆಯಾದ ಚಂದ್ರು: 48 ಗಂಟೆಯೊಳಗೆ ಆರೋಪಗಳನ್ನು ಬಂಧಿಸಿದ ಪೋಲಿಸರು

You Might Also Like

ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜಕೀಯರಾಜ್ಯಸುದ್ದಿ

ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈಜೋಕಾಲಿ 21 ಜನರಿಗೆ ಗಾಯ : ಜಾತ್ರಾ ಕಮೀಟಿ ಅಧ್ಯಕ್ಷ ಸೇರಿದಂತೆ 7 ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲು

May 4, 2026
ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜಕೀಯರಾಜ್ಯಸುದ್ದಿ

ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ವೀಲ್ ಕಟ್ ಆಗಿ 8 ಕ್ಕೂ ಹೆಚ್ಚು ಜನರಿಗೆ ಗಾಯ 2 ಇಬ್ಬರು ಸ್ಥಿತಿ ಗಂಭೀರ

May 3, 2026
ಇದೀಗ ಬಂದ ಸುದ್ದಿಕೃಷಿಜಿಲ್ಲೆರಾಜಕೀಯರಾಜ್ಯಸುದ್ದಿ

ಸಿಡಿಲು ಬಡಿದು 25 ಕುರಿಗಳು ಸಾವು

April 23, 2026
ಇದೀಗ ಬಂದ ಸುದ್ದಿಜಿಲ್ಲೆರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

April 17, 2026
ಸಮಗ್ರ ಪ್ರಭಸಮಗ್ರ ಪ್ರಭ
Follow US

Copyright © 2025 All Rights Reserved.
Website Developed By WebOnline.in

Join WhatsApp Group

Welcome Back!

Sign in to your account

Lost your password?