ಗದಗ: ಮಂಗಳವಾರ ಗದಗ ಜಿಲ್ಲೆ ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದ ಬಳಿ ಹಳ್ಳ ದಾಟುವಾಗ ಆಯ ತಪ್ಪಿ ಕೌಜಗೇರಿ ಆಯುಷ್ಮಾನ್ ಆರೋಗ್ಯ ಕೇಂದ್ರದ ಮೂವರು ಸಿಬ್ಬಂದಿಗಳು ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು ಆ ಪೈಕಿ ಇಬ್ಬರನ್ನು ರಕ್ಷಣಾ ಮಾಡಲಾಗಿದ್ದರು ಬಸಮ್ಮ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋಗಿದ್ದಳು ಮಂಗಳವಾರ ಕಾರ್ಯಾಚರಣೆ ಮಾಡಿದರು ಬಸಮ್ಮನ ಸುಳಿವು ಸಿಗಲಿಲ್ಲ ಇಂದು ಬುಧವಾರ ಕಾರ್ಯಾಚರಣೆ ಮುಂದುವರೆಸಿದ ಅಗ್ನಿಶಾಮಕ ಸಿಬ್ಬಂದಿಗಳು ನೀರಿನಲೇಲಿ ಕೊಚ್ಚಿಕೊಂಡು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಬಸಮ್ಮ ಗುರಿಕಾರ ಶವವನ್ನು ಹಳ್ಳದ ದಡದ ಮುಳ್ಳು ಕಂಟಿಯಲ್ಲಿ ಪತ್ತೆ ಮಾಡಿದ್ದಾರೆ.
