ಪುಕ್ಕಟ್ಟೆ 2 ಸಾವಿರ ಬೇಡ ಎಂದು ಸ್ವಾಭಿಮಾನ ಮೆರೆದ ಅಜ್ಜಿ

graochandan1@gmail.com
1 Min Read

ಕೊಪ್ಪಳ :  ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಪುಕ್ಕಟ್ಟೆಯಾಗಿ ನೀಡುವ 2000 ರೂ ತನಗೆ ಬೇಡವೆಂದು ವೃದ್ಧ ಮಹಿಳೆಯೊಬ್ಬರು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದಲ್ಲಿ ನಡೆದಿದೆ.

ಶಿವಮ್ಮ ಸಜ್ಜನ್ ಎಂಬ ವಯೋವೃದ್ದೆ ಈ ಸ್ವಾಭಿಮಾನದ ಮಾತು ಎಲ್ಲರನ್ನು ಚಕಿತಗೊಳಿಸಿದೆ.ಕಷ್ಟ ಪಟ್ಟು ದುಡಿದು ತಿನ್ನಬೇಕು ಉಚಿತ ಶಾಶ್ವತವಲ್ಲ ಎಂದಿದ್ದಾರೆದೇವರು ನನಗೆ ಎಲ್ಲವೂ ಕರುಣಿಸಿದ್ದಾನೆ.

ಇರೋ ಸವಲತ್ತಿನಲ್ಲೆ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಸರ್ಕಾರದ ಗೃಹಲಕ್ಷ್ಮೀ ಯೋಜನಾ ಮೊತ್ತವಾದ 2 ಸಾವಿರ ರೂ ಬೇಡವೆಂದು ಅಜ್ಜಿ ತಿಳಿಸಿದ್ದಾರೆ. ಈ ಹಿಂದೆ ತಾನು ಕೂಡಿಟ್ಟಿದ್ದ ಹಣವನ್ನೆಲ್ಲ ಗ್ರಾಮದ ಕೆರೆ ಅಭಿವ್ದೃ ಗೆ ನೀಡಿ ಮಾದರಿಯಾಗಿದ್ದ ಅಜ್ಜಿ, ಸಧ್ಯ ಮತ್ತೊಮ್ಮೆ ಮಾದರಿ ನಿರ್ಧಾರ ತೆಗದುಕೊಂಡಿದ್ದಾರೆ. ಅಜ್ಜಿಯ ಈ ನಿರ್ಧಾರಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share this Article