ನಗರಸಭೆ ಸದಸ್ಯನನ್ನು ಕೂಡಿಹಾಕಿದ ಸಾರ್ವಜನಿಕರು

graochandan1@gmail.com
1 Min Read

 

ಗದಗ: ಕಳೆದ 13 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಬೆಟಗೇರಿ ಭಾಗದ ವಾರ್ಡ ನಂ 3 ರಲ್ಲಿ ಹದಗೆಟ್ಟ ರಸ್ತೆಯಲ್ಲಿ ಜನ ವಾಸಿಸುತ್ತಿದ್ದು ಮೂಲಭೂತ ಸೌಲಭ್ಯವಿಲ್ಲದೆ ನರಕದಂತೆ ನಾವು ಜೀವನ ನಡೆಸುತ್ತಿದ್ದೆವೆ ವಾರ್ಡ ರಸ್ತೆ ಅಭಿವೃದ್ಧಿ ಮಾಡಿ ಎಂದು ನಗರ ಸಭೆಗೆ ಹಾಗೂ ಇಲ್ಲಿನ ಸದಸ್ಯರಿಗೆ ಹಲವಾರು ಬಾರಿ ಮನವಿ ಮಾಡಿದರು ಇದಕ್ಕೆ ಸ್ಪಂದಿಸದ ಕಾರಣ ಇಂದು ಮುಂಜಾನೆ ಸ್ಥಳೀಯ ಜನರು ಆಕ್ರೋಶ ಗೊಂಡ ನಗರಸಭೆ ಸದಸ್ಯರೊಬ್ಬರನ್ನು ಕೂಡಿ ಹಾಕಿದ ಘಟನೆ ಬೆಟಗೇರಿಯ ಬಣ್ಣದನಗರದಲ್ಲಿ ಜರುಗಿದೆ.

ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಸಮಸ್ಯೆ ಆಲಿಸಿಲು ಕರೆಸಿಕೊಂಡು ಸಾರ್ವಜನಿಕರು ಕೂಡಿ ಹಾಕಿದ್ದಾರೆ.

- Advertisement -
Ad image

ಈಶ್ವರ ಸೇವಾ ಟ್ರಸ್ಟ್ ಕಮಿಟಿ ಕಛೇರಿಯಲ್ಲಿ ಮುಂಜಾನೆ 10-30ರ ಸುಮಾರಿಗೆ ಕೂಡಿ ಹಾಕಿದ್ದಾರೆ ಕೂಡಿ ಹಾಕಿ‌ದ್ದಾರೆ ಎಂದು ನಗರ ಸಭೆಗೆ ಸುದ್ದಿ ಮುಟ್ಟಿಸಿದರು ಯಾವೊಬ್ಬ ಅಧಿಕಾರಿಗಳು ಅತ್ತ ಕಣ್ಣು ಹಾಸಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಸದಸ್ಯ ಮಾಧುಸಾ ಅವರು, ನಗರಸಭೆ ಆಯುಕ್ತರಿಗೆ ಫೋನ್ ಮಾಡಿದರು ಆಯುಕ್ತರು ಪೋನ ಕರೆಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

 

ಹೀಗಾಗಿ ಇವತ್ತು ವಾರ್ಡಗೆ ಕರೆಸಿ ಕೂಡಿ ಹಾಕಿ ಸಾರ್ವಜನಿಕರು ಬಿಸಿ ತಟ್ಟಿಸಿದ್ದಾರೆ. ಸುದ್ದಿ ತಿಳಿದ ಬೆಟಗೇರಿ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಮನವೊಲಿಸಿ ನಗರಸಭೆ ಸದಸ್ಯ ಮಾಧುಸಾ ಮೆಹರವಾಡೆ ಅವರನ್ನು ಈಶ್ವರ ಸೇವಾ ಟ್ರಸ್ಟ್ ಕಚೇರಿಯಿಂದ ಹೊರತಂದಿದ್ದಾರೆ.

Share this Article